ತಮ್ಮ ತುಂಬು ಹೃದಯದ ಪ್ರೋತ್ಸಾಹಕ್ಕೆ ಧನ್ಯವಾದ ಅಂತ ಹೇಳಿದರೆ, ಬಹುಶಹ ಅದು ಧನ್ಯವಾದ ಹೇಳಿದಂತೆ ಆಗುವುದೇ ಇಲ್ಲವೇನೋ ಎಂದೆನಿಸಿದೆ.
ಸಂಗೀತ ಸಾಹಿತ್ಯ ಕಲೆ ಇವುಗಳಲ್ಲಿ ಒಂದನ್ನು ಕೂಡಾ ಆರಧಿಸದೆ ಇರುವವನು ಮನುಷ್ಯನೇ ಅಲ್ಲ ಅಂತ ಹೇಳುತ್ತದೆ, ಸಂಸೃತ ಸಾಹಿತ್ಯ.
ಅದೇ ರೀತಿ, ಉತ್ತಮವಾದ ಕಾವ್ಯ ರಸಿಕರ ಮನ ತಣಿಸುವ ಕವನ, ಕಾವ್ಯ ರಚನೆ ಸಮಾಜದ ಒಳಿತನ್ನು ಕಾಪಾಡುತ್ತದೆ, ಕಾಪಿದುತ್ತದೆ, ಅದು ಸಮಾಜ ಸೇವೆ ಅನ್ನುತ್ತಾರೆ ನಮ್ಮ ಕನ್ನಡ ದಿಗ್ಗಜರು
ಅಂತೆಯೇ, ತಮ್ಮ ಮಡಿಲಿಗೆ ಮತ್ತಷ್ಟು ಪುಟ್ಟ ಕವನಗಳನ್ನು ಹಾಕುತ್ತ ಇದ್ದೇನೆ
ಓದಿ , ವಿಮರ್ಶಿಸಿ , ತಮ್ಮ ಅಭಿಪ್ರಾಯ ತಿಳಿಸಿ .
ಸಾಹಿತ್ಯ ರಂಗದಲ್ಲಿ ನನ್ನನ್ನು ಇನ್ನಷ್ಟು ಮುಂದಕ್ಕೆ ನಡೆಸಿ.
ಬನ್ನಿ, ನಾವೆಲ್ಲ ಸೇರಿ ಒಂದಷ್ಟು ಒಳ್ಳೆಯ ಸಾಹಿತ್ಯ, ಕವನವನ್ನು ನಮ್ಮ ಕನ್ನಡಕ್ಕೆ ಕೊಡುವ ಪ್ರಯತ್ನ , ಅಳಿಲು ಸೇವೆ ಮಾಡೋಣ.